ನಿನ್ನೋಳಗಿನ ನೀನು
*ನಿನ್ನೋಳಗಿನ ನೀನು *
ಮೂರು ದಿನಗಳ ಬಾಳಬಟ್ಟೆಯ ಸಂತೆಯಲಿ
ಇದಕೊ ಅದಕೊ ಎದಕೊ ಸದಾ ಚಿಂತೆಯ ಕಂತೆ ತೀರಿದು ತೀರುವವೆ ಇವು ಅವು ಪಯಣದಂಚಿನಲಿ ?
ಸದಾ ದುಃಖ ಕೂಪದಲಿ ನೀನೆ ಮಿಂದೆದ್ದು
ಏಕೆ ಶಪಿದುವೆ ನೀನೇ ನಿನ್ನ ಹಣೆಬರಹಬಿಂದು ?
ಅಂತ್ಯದಂತ್ಯದಲಿ ನೋವು ಮರೆಯಲೆಂದು
ಹಠಹಿಡಿದು ಹೊರಟೆ ಕಾಣದಂತೆ ನೀ ಏಲ್ಲಿಗೆ ?
ತನುವಿನ ತೃಷೆಯ ಮಾಟಕೆ ಮನವ ಮಣಿಸದೇ
ದುಃಖ ಎಂದು ದೂರವಾಗಬಲ್ಲದು ನಿನ್ನಲ್ಲಿಯೇ ?
ಅನಂತಾನಂತ ಆಶಾವಿಷಯ ತೀರಲೆಂದು
ಛಲಪಿಡಿದು ಹೊರಟೆ ನೀ ಎಲ್ಲಿಗೆ ?
ಮನದ ಬಯಕೆ ಬಿಸಿಲುಗುದರೆ ಏರಿ
ಬಳಲಿ ಬೆಂಡಾಗಿ ಬಂದು ಸೇರಿದೆ ಎಲ್ಲಿ ?
ನಿನ್ನೊಳಗಿನ ನೀನರಿಯದೇ
ಅಂತರಂಗದ ಕದವತಟ್ಟದೆ
ಎಂದಾದರೂ ದುಃಖ ದೂರವಾಗಬಲ್ಲದೇ
ಬಾಳಹಾದಿಯ ಕದನದಂಚಿನಲಿ
ನಾ ಶಾಂತಿ ಧೂತನಾಗುವೆನೆಂದು
ಯಾವ ಮಂತ್ರ ತಂತ್ರ ಅರಿತರೇನು ?
ದೇವಾದಿ ದೇವರ ಗುಡಿ ಹೊಕ್ಕರೇನು
ಮನಶುದ್ದಿಗೆ ಮುಕ್ಕೊಟಿ ದೇವರ ಗೊಗರೆದರೇನು ?
ಆ ಕ್ಷಣ ಚಿರವಿಜಯ ವೈಜಯಂತಿ ದೊರೆವದೆ ?
ಮನದ ದುಃಖ ದೂರವಾಗಬಲ್ಲದೇ ?
ಮನದ ಮೈಲಿಗೆ ಮಾಡಿಕೊಂಡು
ಮಡಿ ಮಡಿ ಎಂದು ಮೂರು ಹೊತ್ತು ತಿರುಗಿ
ಓಡಾಡಿ ಬಂದು ಅಯೋ ಎಂದು ಕುಳಿತೊಡೆ
ಮನದ ದುಃಖ ದೂರವಾಗಬಲ್ಲದೇ?
ಬದುಕಿನಲಿ ಏನೋ ಕಳೆದುಕೊಂಡೆಯಂದು
ಪಡೆಯಲರಸಿ ತಿರುಗಿ ಮುರುಗಿ ಹೊರಟೆ ಏಲ್ಲಿಗೆ ?
ದಮಸೀದಿ,ಚರ್ಚು,ಆಲಯ, ತಿರುಗಿ ಬಂದು
ಕೊನೆಗೆ ಎಲ್ಲವೂ ಎಲ್ಲರನೂ ಶಪಿಸಿ ಕೊರಗುವದೆಕೆ ?
ನಿನ್ನೋಳಗಿನ ಮನದ ಬಾಂದನಿಯ ಅರಸಿ ಅರುಹಿಕೊಳ್ಳದೇ , ಚೈತನ್ಯಚಿಗುರೊಡೆಯಬಲ್ಲದೆ ಅನಿಕೇತನಪ್ರೀಯ ..
ಪ್ರಹ್ಲಾದ್. ವಾ. ಪತ್ತಾರ
ಕಾಮೆಂಟ್ಗಳು